ಗೋವನ್ ಲೈಸಿಟಿ ಫಿಲಂಸ್ ಲಾಂಛನದಲ್ಲಿ ಕಾರವಾರದ ಹಳಗಾವ ಸೇವರಿನೋ ಫರ್ನಾಂಡೀಸ್ ಕಥೆ-ನಿರ್ಮಾಣದ ಪ್ಲಾನಿಂಗ್ ಕೊಂಕಣಿ ಚಿತ್ರವು ಕಾರವಾರ ಹಾಗೂ ಗೋವಾದಲ್ಲಿ ಮೂರು ಹೊಡೆದಾಟದ ದೃಶ್ಯಗಳು, ನಾಲ್ಕು ಹಾಡಿನ ಚಿತ್ರೀಕರಣ ಪೂರೈಸಿದೆ. ಅಂತಿಮ ಹಂತ ತಪುಪಿರುವ ಈ ಚಿತ್ರಕ್ಕೆ ರಾಜೇಶ್ ಫರ್ನಾಡೀಸ್ ನಿದೇಶಕರು. ಈ ಹಿಂದೆ ಇವರು ಪಾದ್ರಿ (ಕೊಂಕಣಿ) ಹಾಗೂ ಮನ್ಮಥ, ಸಿಐಡಿ. ಈಶ ಚಿತ್ರಗಳನ್ನು ನಿರ್ದೇಶಿಸಿದ್ದರು. ಚಿತ್ರದ ಛಾಯಾಗ್ರಹಣ - ರಮೇಶ್ ಬಾಬು. ಸಂಗೀತ -ವಿನಯ್ ರಾಜ್, ಕಂಬಿರಾಜ್ - ಹೈಟ್ ಮಂಜು - ನೃತ್ಯ, ಸಾಹಸ-ಥ್ರಿಲ್ಲರ್ ಮಂಜು, ಸಮಾಜಮುಖಿಯಾಗಿ ಒಳ್ಳೆಯ ಜನ ಮಾಡುವ ಪ್ಲಾನಿಂಗ್ ಮತ್ತು ಕೆಟ್ಟ ಮನೋಭಾವದ ಜನ ಮಾಡುವ ಪ್ಲಾನಿಂಗ್ ಮಧ್ಯೆ ನಡೆಯುವ ಜಟಾಪಟಿ, ಪ್ರತೀಕಾರ ಮತ್ತು ಅದರಿಂದಾಗುವ ಪರಿಣಾಮಗಳನ್ನೊಳಗೊಂಡ ಚಿತ್ರಕಥಾವಸ್ತುವಾಗಿದೆ.